ಸಮರ

ಸಿಂಬೆ ಸುತ್ತಿದ ಸಾವು ಹೆಡೆಯೆತ್ತಿ ಕಾಡುತಿದೆ
ಸುತ್ತ ಕುಣಿಯುತ್ತಿರುವ ಕನಸುಗಳ ಕೆಣಕಿ
ರಂಗುರಂಗಿನ ಬಟ್ಟೆ, ಮನದಲ್ಲಿ ಮಿಂಚು
ಗರಿಬಿಚ್ಚಿದಾಸೆಗಳ ನವಿಲ ಕಣ್ಣು.

ಮಣ್ಣ ಕಣಕಣದಲ್ಲು ಕನಸುಗಳು ಮೈನೆರೆದು
ಮೌನದಲಿ ಹರಿಯುತಿದೆ ಮುರಳಿ ನಾದ
ಹೊನಲಾಗಿ ಹೊಮ್ಮುವ ಅಲೆಯಲೆಯ ಕಚ್ಚಿ
ಹಾದರದ ಹಲ್ಲೆಗೆ ಸಮರ ಸನ್ನಾಹ

ವಾಸ್ತವದ ಉಸಿರಲ್ಲಿ ಊದಿಕೊಂಡಂಥ ಕನಸು-
ಬಿಟ್ಟಂಥ ಬೇರುಗಳ ನೆಲೆಯ ಹುಡುಕಿ
ವಿಷಗೊಡಲಿಯೇಟಿನಲಿ ತುಂಡುತುಂಡಾಗಿಸುವ
ಕಲ್ಲು ಬದುಕಿನ ಬೀದಿ ಕೊನೆಯದೆಲ್ಲಿ?

ಕೊಲೆಯಾಗಿ ಬಿದ್ದಿರುವ ಕನಸಿನಾ ಚೂರುಗಳು
ಸಾವೊಪ್ಪದೆ ಸೆಣಸುತಿವೆ, ಜೀವವೆಲ್ಲಿ?
ಕಣ್ಣ ಬೆಳಕಿಗೆ ಇಲ್ಲಿ ಕತ್ತಲೆಯ ಕಿಡಿ ಹತ್ತಿ
ಬೂದಿಯಾಗಿದೆ ನೋಟ, ಭಾವವೆಲ್ಲಿ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post Daniel Defoe ನೈತಿಕತೆಯ ದ್ವಂದ್ವ ವಿಚಾರಗಳು – Moll Flanders
Next post ತಮಿಳ್ ಸೆಲ್ವಿ

ಸಣ್ಣ ಕತೆ

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಜುಡಾಸ್

    "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

cheap jordans|wholesale air max|wholesale jordans|wholesale jewelry|wholesale jerseys